ಕನ್ನಡ – ಕರ್ನಾಟಕ – ಭಾರತ

ಕನ್ನಡಿಗರಿಗೆ ಕರ್ನಾಟಕವನ್ನು ದುರ್ಬಲಗೊಳಿಸಿ ಕಟ್ಟುವ ಭಾರತ ಬೇಕಾಗಿಲ್ಲ. ಸಂಪದ್ಭರಿತ ಸಂಸ್ಕೃತಿಸಂಪನ್ನ ಕರ್ನಾಟಕವು ಮಾತ್ರ ಕನ್ನಡಿಗರ ವೈಶಿಷ್ಟ ವನ್ನು ಕಾಪಾಡಬಲ್ಲದು. ಕನ್ನಡ ಇತಿಹಾಸದಿಂದ ಕಲಿಯಬೇಕಾದ ದೊಡ್ಡ ಪಾಠವಿದೆ. ಕ್ರಿ. ಶ. ೧೫೬೫ರಲ್ಲಿ ವಿಜಯನಗರ ಸಾಮ್ರಾಜ್ಯವು ಮಣ್ಣು ಪಾಲಾದ ರಕ್ಕಸತಂಗಡಿ ಯುದ್ಧದ ಬಳಿಕ ಕನ್ನಡಿಗನಿಗೆ ಜೀವಸತ್ವವನ್ನು ಒದಗಿಸುತ್ತಿದ್ದ ದೊಡ್ಡ ರಾಜಮನೆತನಗಳು ಮರೆಯಾದವು. ಅಲ್ಲಿಂದ ಇಪ್ಪತ್ತನೆಯ ಶತಮಾನದವರೆಗೆ ಚರಿತ್ರೆಯ ಘಟನೆಗಳು ಕನ್ನಡಿಗರನ್ನು ಅಧೀರರನ್ನಾಗಿ ಮಾಡಿದವು. ಕರ್ನಾಟಕವು ಅನ್ಯಭಾಷೀಯರ ಆಡುಂಬೊಲ್ಲವಾಯಿತು. ಅನಂತಪುರ, ಸೇಲಂ, ನೀಲಗಿರಿ, ಕಾಸರಗೋಡು, ಗೋವಾ, ಔರಂಗಾಬಾದ್, ಸೊಲ್ಲಾಪುರ, ಕೊಲ್ಲಾಪುರ, ನಾಂದೇಡ್ ಇವೇ ಮೊದಲಾದ ಪ್ರದೇಶಗಳಲ್ಲಿ ಅನ್ಯಭಾಷೀಯರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಯೂರಿ ಅವು ಕನ್ನಡಿಗರ ಕೈ ತಪ್ಪಿದವು. ಕನ್ನಡಿಗ ತನ್ನತನದ ಬಗ್ಗೆ ಇದ್ದ ಜಾಗೃತಿಯನ್ನು ಕಳೆದುಕೊಂಡ ಫಲ ಇದು. ಅತಿ ವಲಸೆಯಿಂದಾಗಿ ಕರ್ನಾಟಕದಲ್ಲೇ ಇರುವ ಬೆಳಗಾವಿಯ ಪರಿಸ್ಥಿತಿ ಏನಾಗಿದೆ ನೋಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ