ಸ್ವಾಮಿ ವಿವೇಕಾನಂದರ ಒಂದು ಕತೆ ಜ್ಞಾಪಕಕ್ಕೆ ಬರುತ್ತದೆ. ಚಿಕ್ಕ ಹುಲಿಮರಿಯೊಂದು ಕುರುಬನ ಕೈಗೆ ಸಿಕ್ಕಿ ಅದು ಕುರಿಗಳ ಜೊತೆ ಬೆಳೆಯಿತು. ಅದೂ ಹುಲ್ಲು ತಿಂದು ಮೇ ಮೇ ಎಂದು ಅರಚಿತು. ಒಂದು ದಿನ ಬೇರೊಂದು ದೊಡ್ಡ ಹುಲಿ ಅಟ್ಟಿಸಿಕೊಂಡು ಬಂದಾಗ ಉಳಿದ ಕುರಿಗಳಂತೆಯೇ ಅದೂ ಹೆದರಿ ಓಡಿತು. ಆ ಹುಲಿ ಅಚ್ಚರಿಗೊಂಡು ಹುಲಿಮರಿಯನ್ನು ಆರಿಸಿ ಹಿಡಿದು, ಎಳೆದುಕೊಂಡು ಹೋಗಿ ಒಂದು ಕೊಳದ ಮೇಲೆ ಮುಖವನ್ನು ಚಾಚಿದಾಗ ತಾನೂ ಆ ಹುಲಿಮರಿಯಂತೆಯೇ ಇರುವುದನ್ನು ಕಂಡು ಹುಲಿಮರಿಗೆ ಆಶ್ಚರ್ಯವೋ ಆಶ್ಚರ್ಯ! “ನೀನು ಕುರಿಯಲ್ಲ, ಹುಲಿ” ಎಂದು ಹೇಳಿ, ಗರ್ಜಿಸುವುದನ್ನು ಹುಲಿ ಆ ಮರಿಗೆ ಕಲಿಸಿತು. ಆ ಹುಲಿಮರಿ ಹಿಂದಕ್ಕೆ ಕುರಿಗಳ ಮಂದೆಗೆ ಹೋಗಿ ಗರ್ಜಿಸಿದಾಗ ಕುರಿಗಳೆಲ್ಲ ದಿಕ್ಕಾಪಾಲಾದವು. ಸ್ವಸ್ವರೂಪ eನವನ್ನು ಪಡೆದ ಆ ಹುಲಿಮರಿ ಕುರಿತನದಿಂದ ಹುಲಿತನವನ್ನು ಪಡೆದು ಕಾಡಿಗೆ ಹಿಂದಿರುಗಿ ವನರಾಜನಾಗಿ ಮೆರೆಯಿತು. ಗರ್ಜಿಸುತ್ತ ಎದೆ ಉಬ್ಬಿಸಿ ನಡೆದಾಡಿತು. ಕನ್ನಡ ಜನ ಹುಲಿಮರಿಗಳಿದ್ದಂತೆ. ಅವರ ಸ್ವರೂಪeನ ಅವರಿಗೆ ತಾತ್ಕಾಲಿಕವಾಗಿ ಮರೆಯಾಗಿದೆ. ಅಥವಾ ಮರೆಯಾಗಿತ್ತು. ಇಡೀ ಭಾರತದಲ್ಲಿ ಯಾವುದೇ ದೃಷ್ಟಿಯಿಂದಲೂ ಅವರು ತಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿ, ಬುದ್ಧಿಶಕ್ತಿ, ಕಲೆಗಳಲ್ಲಿ ಹೆಮ್ಮೆ ಪಟ್ಟುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಇತಿಹಾಸದ ಅರಿವು ಅವರಿಗೆ ಈಗೀಗ ಜ್ಞಾನೋದಯವನ್ನುಂಟುಮಾಡಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ